News and articles
ಶೃಂಗಾರರಸ
ರಸಗಳ ರಾಜ ಶೃಂಗಾರ. ಯಕ್ಷಗಾನ ಪ್ರಸಂಗಗಳಲ್ಲೂ ಶೃಂಗಾರಕ್ಕೊಂದು ವಿಶಿಷ್ಟ ಸ್ಥಾನವಿದೆ. ಸುಲಲಿತ ಪದಾವಲಿ, ಸುಂದರ ಅಭಿನಯ, ಕಾವ್ಯವನ್ನು ಕಟ್ಟಿಕೊಡುವ ವಾಗ್ವಿಶೇಷತೆ ಇವೆಲ್ಲ ಶೃಂಗಾರರಸವನ್ನು ಚೆನ್ನಾಗಿ ಪೋಷಿಸುತ್ತವೆ. ರತಿಯು ಶೃಂಗಾರದ ಸ್ಥಾಯಿಭಾವ. ನಾಯಕನಿಗೆ ನಾಯಕಿ, ನಾಯಕಿಗೆ ನಾಯಕ ಈ ರಸಕ್ಕೆ ಆಲಂಬನವಾಗಿದೆ.ಚಂದ್ರ, ಬೆಳದಿಂಗಳು, ಭ್ರಮರ, ಲತಾಮಂಟಪ, ಉದ್ಯಾನ, ಏಕಾಂತ ಮೊದಲಾದವು ಉದ್ದೀಪನವಿಭಾವಗಳು. ಕುಡಿನೋಟ, ಕಳ್ಳನೋಟ, ಭ್ರೂವಿಕ್ಷೇಪ, ತುಟಿಕಚ್ಚುವುದು, ಕೆಲವು ಅಂಗಚೇಷ್ಟೆ ಇವೆಲ್ಲ ಇದರ ಅನುಭಾವಗಳು. ಲಜ್ಜೆ, ಹಾಸ ಇವೆಲ್ಲ ಸಂಚಾರಿ ಭಾವಗಳು. ಸಿಟ್ಟು, ಉಗ್ರತೆ, ಆಲಸ್ಯ, ಜುಗುಪ್ಸೆ, ಮರಣ ಇಂತಹ ಸಂಚಾರಿಭಾವವನ್ನು ಹೊರತು ಪಡಿಸಿ ಉಳಿದವು ಈ ರಸಕ್ಕೆ ಪೋಷಕವಾಗಿತ್ತವೆ. ಇದರ ರ್ಣ ಶ್ಯಾಮ, ದೇವತೆ ವಿಷ್ಣು. ಶೃಂಗಾರದಲ್ಲಿ ಮುಖ್ಯವಾಗಿ ಎರಡು ವಿಧ- ೧.ಸಂಭೋಗ(ಸಂಯೋಗ), ೨. ವಿಪ್ರಲಂಭ. ಕಾವ್ಯಲಕ್ಷಣಕಾರರ ಮತದಂತೆ ಸಂಯೋಗಶೃಂಗಾರಕ್ಕಿಂತಲೂ ವಿಪ್ರಲಂಭಶೃಂಗಾರವೇ(ನಾಯಕ/ನಾಯಕಿ ಸಮೀಪದಲ್ಲಿ ಇಲ್ಲದೆ ಇರುವುದು) ಹೆಚ್ಚು ಶಕ್ತಿಯುತವಾಗಿದೆ. ಯಕ್ಷಗಾನ ಪ್ರಸಂಗದ ಉದಾಹರಣೆಯನ್ನು ನೋಡುವುದಾದರೆ, ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಭೀಷ್ಮಪ್ರತಿಜ್ಞೆ ಪ್ರಸಂಗದ ಶಂತನುವಿನ ಪದ್ಯ. ಕಲಕೀರವಾಣಿ ನೀನಾರಾತ್ಮಭವಳು/ ಚೆಲುವೆ ನಿನ್ನಯ ಪೆಸರ ವಂಚಿಸದೆ ಪೇಳು// ಮಲಯಗಂಧಿನಿ ಎನ್ನ ಸ್ಮರದಹಿಪ ಕೇಳು/ ಒಲಿಸುವರೆ ಬಂದಿಹೆನು ಒಲವಿನಿಂದೇಳು// ಇಲ್ಲಿ ಕಲಕೀರ ವಾಣಿ, ಚೆಲುವೆ, ಮಲಯಗಂಧಿನಿ, ಸ್ಮರದಹಿಪ ಈ ಪದಗಳು ಶೃಂಗಾರರಸದಭಿನಯಕ್ಕೆ, ರಸಸ್ಫುರಣೆಗೆ ಪೂರಕವಾಗಿವೆ. ಶಂತನುವಿಗೆ ಸತ್ಯವತಿಯೇ ಆಲಂಬನ. ನದಿಯ ಜುಳು ಜುಳು ನಾದ, ಸತ್ಯವತಿಯ ಮೈಯಿಂದ ಬಂದ ಗಂಧ, ಯಮುನೆಯನ್ನು ಕಂಡಾಗ ಗಂಗೆಯ ಸ್ಮರಣೆ ಇವೆಲ್ಲ ಉದ್ದೀಪನವಿಭಾವವಾಗಿವೆ. ಸತ್ಯವತಿಯ ಸೌಂರ್ಯವನ್ನು ಸವಿಯುವುದೇ ಅನುಭಾವ. ಹೀಗೆ ಅಭಿನಯ ಮತ್ತು ನಾಟ್ಯಗಳಿಂದ ಶೃಂಗಾರಾಭಿವ್ಯಕ್ತಿಯಾಗುತ್ತದೆ. ಯಕ್ಷಗಾನದಲ್ಲಿ ರ್ಥಗಾರಿಕೆಯು ಒಂದು ವಿಶಿಷ್ಟ ಶಕ್ತಿಯಾಗಿದೆ. ಅದು ಕೇವಲ ಪದ್ಯದ ಸಾರಾಂಶವನ್ನು ಹೇಳುವುದಲ್ಲ. ಪದ್ಯ ಎಂಬ ಮೊಗ್ಗು ಹೂವಾಗಿ ಅರಳುವ ವಿಕಾಸದ ಸೊಬಗು. ಸೂತ್ರವು ವ್ಯಾಖ್ಯಾನವಾಗುವ ರೀತಿ. ಕಲ್ಲು ಶಿಲ್ಪವಾಗುವ ಉಪಕ್ರಮ. ಇಲ್ಲಿ ಈ ಪದ್ಯಕ್ಕೆ ರ್ಥದಲ್ಲಿ ಸ್ತ್ರೀಯ ಸೌಂರ್ಯ ರ್ಣನೆ, ಸ್ಮರನ ಬಾಧೆಯಿಂದಾದ ಸ್ಥಿತಿ, ಸಂಸಾರದ ಸವಿಯ ಸಾರ ಇವನ್ನೆಲ್ಲ ಮಾತನಾಡುವ ಮೂಲಕ ಶೃಂಗಾರರಸದಡುಗೆಯನ್ನು ಬಡಿಸಿ ಪ್ರೇಕ್ಷಕನು ಸವಿರುಚಿಯುಣ್ಣುವಂತೆ ಮಾಡಬಹುದು. ಇದು ಸಂಯೋಗಶೃಂಗಾರಕ್ಕೆ ಒಂದು ಉದಾಹರಣೆ. ವಿಪ್ರಲಂಭ ಶೃಂಗಾರದ ಉದಾಹರಣೆಯಾಗಿ ಒಂದು ಪದ್ಯವನ್ನು ನೋಡುವುದಾದರೆ, ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ ಮಾರುತಿ ಪ್ರತಾಪದ ಸತ್ಯಭಾಮೆಯ ಪದ್ಯ. ಬಾರನ್ಯಾಕೆ ಮಾರಜನಕ ಸಾರಸಾಕ್ಷಿಯೇ/ ಮೂರುದಿನಗಳಾಯ್ತು ಬರದೆ ಬಾರಿ ಬಳಲಿದೆ// ಯಾರ ನಾರಿ ನಿಲಯದೊಳಗೆ ಸೇರಿರುವನೋ/ ನೀರೆ ಪೋಗಿ ಕರೆದು ತಾರೆ ಮಾರಜನಕನ// ಇಲ್ಲಿ ಬಾರನ್ಯಾಕೆ ಮಾರಜನಕ, ಮೂರುದಿನಗಳಾಯ್ತು ಬರದೆ ಇವೆಲ್ಲ ವಿರಹದ ವೇದನೆಯನ್ನು ಬಹಳ ಚೆನ್ನಾಗಿ ಪ್ರಕಟಿಸುತ್ತವೆ. ಯಾರ ನಾರಿ ನಿಲಯದೊಳಗೆ ಸೇರಿ ಕೊಂಬನೋ ಎಂಬ ಮತ್ಸರವು ವಿಪ್ರಲಂಭ ಶೃಂಗಾರವನ್ನು ಮತ್ತಷ್ಟು ಉದ್ದೀಪನ ಗೊಳಿಸಿದೆ. ನೀರೆ ಪೋಗಿ ಕರೆದು ತಾರೆ ಎಂಬಲ್ಲಿ ವಿರಹವನ್ನು ಸಹಿಸದ ಭಾವ ವ್ಯಕ್ತವಾಗುತ್ತದೆ. ಬೇಸರ, ಹತಾಶೆಗಳು ಅನುಭಾವವಾಗಿ ಮತ್ಸರ ಸಂಚಾರಿ ಭಾವವಾಗಿದೆ. ರತಿಯು ಸ್ಥಾಯಿಭಾವವಾಗಿ ಶೃಂಗಾರರಸಸ್ಫುರಣೆಯಾಗುತ್ತದೆ.
ರಜನೀಶ ಹೊಳ್ಳ, ಕೆಂಪಿನಮಕ್ಕಿ
ಕಾಫಿ ನಾಡಲ್ಲೊಂದು ಯಕ್ಷ ಸಂಸ್ಥೆ - ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ
ಕಡಲತೀರದ ಪರಿಪೂರ್ಣ ಕಲೆಎಂದೇ ಜನಜನಿತವಾದ ಯಕ್ಷಗಾನವು ಅಲ್ಲಿನ ಎಲ್ಲರ ಉಸಿರಲ್ಲೂ ಬೆರೆತಿರುತ್ತದೆ. ಚೆಂಡೆಯ ಸದ್ದು ಎಲ್ಲರ ಕಿವಿ ನಿಮಿರಿಸುತ್ತದೆ. ಕಾಲಲ್ಲಿ ಹೆಜ್ಜೆ ಹಾಕಿಸುತ್ತದೆ. ಮಲೆನಾಡಿಗೆ ಅದು ಹೊಸತು. ಆದರೆ ಕಾಫಿ ನಾಡಾದ ಚಿಕ್ಕಮಗಳೂರು ಜಿಲ್ಲೆಯ ಪುಟ್ಟ ಊರು ಪಚ್ಛೆ ಹಳ್ಳಿ ಹಳುವಳ್ಳಿಯಲ್ಲಿ ಚೆಂಡೆ ಮದ್ದಳೆಯ ಸದ್ದು ಮೊಳಗುತ್ತದೆ. ಕಾಂತೀಯ ಶಕ್ತಿಯನ್ನು ಹೊಂದಿರುವ ಕಲೆಯನ್ನು ಮಲೆನಾಡಿನ ಹೊಸಿಲಿಗೆ ತಂದ ಕೀರ್ತಿ ಹಳುವಳ್ಳಿಯ ಸೊಸೆ ಕಡಲೂರಿನ ಮಗಳು ಶ್ರೀಮತಿ ಜ್ಯೋತಿ ಟಿ ಎನ್ ರವರಿಗೆ ಸಲ್ಲುತ್ತದೆ. ಅಲ್ಲಿಂದ ಪ್ರಾರಂಭವಾಯಿತು ನೋಡಿ, ಹತ್ತು ಹಲವು ಯಕ್ಷಗಾನ ಚಟುವಟಿಕೆಗಳು. "ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ" ಎಂಬ ಸಂಸ್ಥೆಯನ್ನು ಆಕೆ ಸ್ಥಾಪಿಸಿಯೇ ಬಿಟ್ಟರು. ಪಣ ತೊಟ್ಟು ಆಸಕ್ತ ಮಕ್ಕಳಿಗೆ ಯಕ್ಷಗಾನದ ತಾಲೀಮು ಸುರು ಮಾಡಿಕೊಂಡರು ಜೊತೆಜೊತೆಗೆ ಪ್ರದರ್ಶನಕ್ಕೆ ಬೇಕಾದ ವೇಷ-ಭೂಷಣ, ಬಣ್ಣ, ಹಿಮ್ಮೇಳದವರನ್ನು ಕರೆಸಿ ಹಳುವಳ್ಳಿಯಲ್ಲೊಂದು ಯಕ್ಷಗಾನ ಪ್ರದರ್ಶನ ಕೊಟ್ಟೆ ಬಿಟ್ಟರು ಈ ಸಾಹಸಿ ಹೆಣ್ಣು ಮಗಳು. ಇದು ಮಲೆನಾಡಿನಲ್ಲಿ “ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ" ಹುಟ್ಟಿಕೊಂಡ ಕಥೆ. ಈ ಸಂಸ್ಥೆಗೆ ತರಬೇತುದಾರರಾಗಿ ಮಂಗಳೂರಿನಿAದ ಬರುತ್ತಿದ್ದ, ದಿನಕರ್ ಪಚ್ಚನಾಡಿ, ಶರತ್ ಕುಮಾರ್ ಕದ್ರಿ ಮೊದಲಾದವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಭಾಗವತರಾದ ಜಿ ಕೆ ನಾವುಡ, ಗುರುಗಳಾದ ರಮೇಶ್ ಶೆಟ್ಟಿ ಸಂಸ್ಥೆಗೆ ಅನುಭವಗಳ ಕೊಡುಗೆ ನೀಡಿದ್ದಾರೆ. ಸುಧನ್ವ ಮೋಕ್ಷ, ಸುದರ್ಶನ ಗರ್ವಭಂಗ, ಬಬ್ರುವಾಹನ, ಮಹಿಷವಧೆ, ಶಶಿಪ್ರಭಾ ಪರಿಣಯ, ದಕ್ಷ ಯಜ್ಞ, ಇಂದ್ರಜಿತು ಕಾಳಗ, ಕೃಷ್ಣಲೀಲೆ - ಕಂಸವಧೆ, ಶುಂಭವಧೆ, ಗಣೇಶ ಕೌತುಕ, ಮುರಾಸುರ ವಧೆ, ಜಾಂಬವತಿ ಕಲ್ಯಾಣ, ಗಿರಿಜಾ ಕಲ್ಯಾಣ, ಸುಧನ್ವ ಮೋಕ್ಷ, ಮಹಿಷಮರ್ದಿನಿ, ವೀರಮಣಿ ಕಾಳಗ, ಪೂತನಿಸಂಹಾರ, ಶ್ವೇತಕುಮಾರ ಚರಿತ್ರೆ ಹೀಗೆ ಹಲವಾರು ಪ್ರಸಂಗಗಳ ಪ್ರದರ್ಶನ ನೀಡಿದ ಹಿರಿಮೆ ಈ ಸಂಸ್ಥೆಯದು. ಕನ್ನಡ ಸಂಸ್ಕೃತಿ ಇಲಾಖೆ ನಡೆಸುವ ೨೦ ನಿಮಿಷಗಳ ಯಕ್ಷಗಾನದಿಂದ ಹಿಡಿದು, ಆಹೋರಾತ್ರಿಯೂ ಕೂಡ ತಂಡ ಯಕ್ಷಗಾನ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದೆ. ದುರ್ಗಾ ಮಕ್ಕಳ ಮೇಳ ಕಟೀಲು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಸತತ ೭ ನೇ ವರ್ಷದ ಪ್ರದರ್ಶನ ನೀಡಿ, ಜನಮಾನಸದಲ್ಲಿ ತನ್ನ ಹೆಸರನ್ನು ಅಚ್ಚಳಿಯದಂತೆ ಮೂಡಿಸಿರುವ ತಂಡ , ೨೦೧೯ ರಲ್ಲಿ ದೆಹಲಿಯ ಕನ್ನಡ ಸಂಘದಲ್ಲಿ ಮಹಿಷ ವಧೆ ಪ್ರಸಂಗ ಪ್ರದರ್ಶಿಸಿ ರಾಜಧಾನಿಯಲ್ಲಿ ಕೂಡ ಜನ ಮನ್ನಣೆ ಪಡೆದಿದೆ. ರಾಷ್ಟ್ರ - ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗಳನ್ನು ನೀಡುತ್ತಾ ಬಂದಿದೆ. ಸಂಸ್ಥೆಯನ್ನು ಹುಟ್ಟು ಹಾಕಿದ ಶ್ರೀಮತಿ ಜ್ಯೋತಿಯವರ ಕಲಾಸೇವೆಯನ್ನು ಪರಿಗಣಿಸಿ ಕಳಸ ರೋಟರಿ ಹಾಗೂ ಜೇ ಸಿ ಐ ರವರು ಸನ್ಮಾನಿಸಿದ್ದಾರೆ. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಕಾರ್ಕಳದಲ್ಲಿ, ಬೆಳುವಾಯಿಯಲ್ಲಿ ಶ್ರೇಷ್ಠ ಯಕ್ಷಗುರು, ಪಟ್ಲ ಫೌಂಡೇಶನ್ ಕೊಡಮಾಡುವ ಯಕ್ಷನಿಧಿ , ಆಂಜನೇಯ ಚಿಕ್ಕಮೇಳ ಪುತ್ತೂರುನಿಂದ ಸಮ್ಮಾನ , ತಾರಾನಾಥ ವರ್ಕಾಡಿಯವರಿಂದ ಬೆಳ್ಮಣ್ ನಲ್ಲಿ ಸಮ್ಮಾನ ,ಮಹಿಳಾ ಸಾಹಿತ್ಯ ಸಮ್ಮೇಳನ ಚಿಕ್ಕಮಗಳೂರು "ವನಿತಾ ಶ್ರೀ "' , ಮನ್ವಂತರ ಬಳಗ ಕಳಸ ಇವರಿಂದ "ಮಲೆನಾಡ ಯಕ್ಷ ಸಿರಿ" ಮೊದಲಾದ ಬಿರುದುಗಳಿಗೆ ಪಾತ್ರರಾಗಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ನಾಗಭೂಷಣ್ ಹೊಳ್ಳ ಸಂಸ್ಥೆಯ ಬೆಳವಣಿಗೆಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಶ್ರೀಮತಿ ಸರಳ ಭಟ್, ಶ್ರೀಮತಿ ಶುಭಮತಿ, ಶ್ರೀಮತಿ ಸವಿತಾ ಸಂಸ್ಥೆಯ ಕಾರ್ಯಕ್ರಮಗಳಿಗೆ ಸಹಕರಿಸುತ್ತಿದ್ದಾರೆ.
ಲೇಖಕರು: ಶ್ರೀಮತಿ ಚೈತ್ರ ಎಸ್ಪಿ
ನಾದದಲ್ಲಿ ಲೀನವಾದ ಕಂಚಿನ ಕಂಠ - ಉಭಯ ತಿಟ್ಟುಗಳ ಸವ್ಯಸಾಚಿ - ಕಡತೋಕ ಮಂಜುನಾಥ ಭಾಗವತ
ಕಾಳಿಂಗ ನಾವಡರು ಸೃಷ್ಟಿಸಿದ ಭಾಗವತಿಕೆಯ ಹೊಸ ಮಾರ್ಗ
ಯಕ್ಷಗಾನ ಭಾಗವತಿಯಲ್ಲಿ ಕ್ರಾಂತಿ ಮೂಡಿಸಿದ ೩೦ ವರ್ಷದ ಹಿಂದೆ ನಮ್ಮನ್ನಗಲಿದ, ಯಕ್ಷಗಾನ ಭಾಗವತಿಕೆಯ ಯುಗ ಪ್ರವರ್ತಕ ಕಾಳಿಂಗ ನಾವಡರು ಯಕ್ಷಗಾನ ಭಾಗವತಿಕೆಗೆ ಹೊಸದೊಂದು ಶೈಲಿಯನ್ನು ಹುಟ್ಟು ಹಾಕಿದವರು. ತಮ್ಮ ಕಂಚಿನ ಕಂಠದಿAದ ಹೊಸ ಹೊಸ ಯಕ್ಷಗಾನೇತರ
ರಾಗಗಳನ್ನು ಪರಿಚಯಿಸಿದ ಇವರು ಭೈರವಿ, ಮಧ್ಯಮಾವತಿ, ಮೋಹನ, ಬಿಲಹರಿ, ಸಾವೇರಿ ಕಾಂಬೋದಿ, ಮುಂತಾದ ಹಳೆಯ ರಾಗಗಳಿಗೆ ಹೊಸ ಸಂಚಾರ ನೀಡಿದವರು. ಚಾಂದ್, ಬೇಹಾಗ್, ಬಹುದಾರಿ, ಚಾರುಕೇಶಿ, ಅಬೇರಿ, ರೇವತಿ ಮುಂತಾದ ಯಕ್ಷಗಾನದಲ್ಲಿ ಬಳಕೆಯಾಗದ ರಾಗಗಳನ್ನು ಬಳಸಿಕೊಂಡು ಯಕ್ಷಗಾನಕ್ಕೆ ಹೊಸ ಹಿಮ್ಮೇಳಾಸಕ್ತರನ್ನು ಮುಖ್ಯವಾಗಿ ಯುವ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡರು, ನಾಗಶ್ರೀ ಪ್ರಸಂಗದ ನೀಲ ಗಗನದೊಳು ಮೇಘಗಳು, ಚೆಲುವೆ ಚಿತ್ರಾವತಿಯ ಧರಣಿಮಂಡಲ ಮಧ್ಯದೊಳಗೆ, ಚೈತ್ರಪಲ್ಲವಿಯ ರಾಗಾನುರಾಗಿಣಿ, ಮುಂತಾದ ಹೊಸ ಮಾದರಿಯ ಪದ್ಯಗಳನ್ನು ಹೊಸ ಹೊಸ ರಾಗದಲ್ಲಿ ನರಂಜಿಸುವAತೆ ಹಾಡುತಿದ್ದರು. ನಾವಡರು ಹೇಗೆ ತನ್ನ ಗುರುಗಳಾದ ನಾರ್ಣಪ್ಪ ಉಪ್ಪೂರರ ಮಾರ್ವಿ ಶೈಲಿಯ ಭಾಗವತಿಕೆ ಮತ್ತು ತಂದೆ ರಾಮಚಂದ್ರ ನಾವಡರ ಕುಂಜಾಲು ಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡರು ಎನ್ನುವುದು ಅವರ ಹೊಸ ಶೈಲಿಯ ಉಗಮಕ್ಕೆ ಕಾರಣವಾಯಿತು. ಆರಂಭದಲ್ಲಿ ಗುರು ನಾರ್ಣಪ್ಪ ಉಪ್ಪೂರರ ಶೈಲಿಯಲ್ಲಿ ಹಾಡುತಿದ್ದ ಅವರು ಕ್ರಮೇಣ ತಂದೆಯವರ ಕುಂಜಾಲು ಶೈಲಿಗೆ ಹೊರಳಿಕೊಂಡರು. ಆಗ ಮಾರ್ವಿ ಹಾಗು ಕುಂಜಾಲು ಶೈಲಿಯ ಸುಂದರ ಸಂಗಮವಾಗಿ ಹೊಸ ಶೈಲಿಯ ಉಗಮವಾಯಿತು ಅದೇ ನಾವಡರ ಶೈಲಿ. ಇಂದು ಅನೇಕರು ಕುಂಜಾಲು ಶೈಲಿಯಲ್ಲಿ ಹಾಡಿದರೆ ಉಪ್ಪೂರರ ಶೈಲಿಯಲ್ಲಿ ಹಾಡಲಾರರು. ಉಪ್ಪೂರರ ಶೈಲಿಯ ಭಾಗವತರು ಕುಂಜಾಲು ಶೈಲಿಯಲ್ಲಿ ಹಾಡಲಾರರು. ನಾವಡರಂತಹ ಕೆಲವೇ ಕೆಲವರಿಗೆ ಮಾತ್ರ ಇದು ಸಾಧ್ಯವಾಗಿದೆ. ನಾವಡರು ಅತಿಯಾಗಿ ಮೆಚ್ಚುತ್ತಿದ್ದ ಕರ್ಣಾರ್ಜುನ ಕಾಳಗ, ದೌಪದಿ ಪ್ರತಾಪ, ಕ್ರಷ್ಣಾರ್ಜುನ, ರತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ಜಾಂಬವತಿ ಕಲ್ಯಾಣಕ್ಕೆ ಹೆಚ್ಚು ಪ್ರಚಲಿತವಿದ್ದ ಕುಂಜಾಲು ಶೈಲಿಯನ್ನೂ, ಚೂಡಾಮಣಿ-ರಾಮಾಂಜನೇಯ-ಭಸ್ಮಾಸುರ ಮುಂತಾದ ಪ್ರಸಂಗಗಳಿಗೆ ಮಾರ್ವಿ ಶೈಲಿಯನ್ನೂ ಬಳಸುತಿದ್ದರು. ಕುಂಜಾಲು ಶೇಷಗಿರಿ ಕಿಣಿಯವರಿಂದ ಪ್ರಾರಂಭಗೊAಡ ಕುಂಜಾಲು ಶೈಲಿಯನ್ನು ನೀಲಾವರ ರಾಮಕೃಷ್ಣಯ್ಯ, ಗೋರ್ಪಾಡಿ ವಿಠಲ ಪಾಟೀಲ್, ಜಾನುವಾರುಕಟ್ಟೆ ಭಾಗವತರು, ಮರಿಯಪ್ಪಾಚಾರ್ ಸಮರ್ಥವಾಗಿ ರೂಢಿಸಿಕೊಂಡರು. ಅದೇ ಪರಂಪರೆಯಲ್ಲಿ ಹಾಡಿ ಮಂದಾರ್ತಿ ಮೇಳದಲ್ಲಿ ಕುಂಜಾಲು ಶೈಲಿಯ ಪ್ರಾತಿನಿಧಿಕ ಭಾಗವತರು ನಾವಡರ ತಂದೆ ರಾಮಚಂದ್ರ ನಾವಡರು. ಇಲ್ಲಿ ಚಾಲು ಕುಣಿತಗಳು ಕಡಿಮೆ ಇದ್ದು ಮದ್ದಳೆಗಾರಿಕೆಗೆ ಹೆಚ್ಚು ಪ್ರಾಶಸ್ತ್ಯ ಇರಲಿಲ್ಲ. ತಂದೆ ಶ್ರೀನಿವಾಸ ಉಪ್ಪೂರರಿಂದ ಬಳುವಳಿಯಾಗಿ ಬಂದ ಮಾರ್ವಿ ಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡ ನಾರ್ಣಪ್ಪ ಉಪ್ಪೂರರು ಮದ್ದಳೆಗಾರ ಬೇಳಂಜೆ ತಿಮ್ಮಪ್ಪ ನಾಯ್ಕರು ಮತ್ತು ದುರ್ಗಪ್ಪ ಗುಡಿಗಾರರೊಂದಿಗೆ ಯಕ್ಷಗಾನ ಭಾಗವತಿಕೆಗೆ ಹೊಸ ಆವಿಷ್ಕಾರ ಮಾಡಿದರು. ಕುಣಿತದಲ್ಲಿ ನಿಪುಣರಾದ ಕೆರೆಮನೆ ಕಲಾವಿದರು ಚಿಟ್ಟಾಣಿಯವರು ವೀರಭದ್ರ ನಾಯ್ಕರು ಶಿರಿಯಾರ ಮಂಜುನಾಯ್ಕರು ಕೋಟ ವೈಕುಂಠ ಮುಂತಾದವರು ಈ ಶೈಲಿಯನ್ನು ಸಮರ್ಥವಾಗಿ ರಂಗದಲ್ಲಿ ತೋರ್ಪಡಿಸಿದರು. ಉಪ್ಪೂರರ ಶೈಲಿಯಲ್ಲಿ ಅಭಿನಯಕ್ಕೆ ಹೆಚ್ಚು ಅವಕಾಶ ಇರುವುದರಿಂದ ಉತ್ತರ ಕನ್ನಡದ ಕಲಾವಿದರು ಇದನ್ನು ಹೆಚ್ಚು ನೆಚ್ಚಿಕೊಂಡರು. ಶೇಷಗಿರಿ ಕಿಣಿ ಮತ್ತು ರಾಮಚಂದ್ರ ನಾವಡರ ಕುಂಜಾಲು ಶೈಲಿಯಲ್ಲಿ ಆಲಾಪಣೆಯ ಸೊಬಗಿದೆ. ಇಲ್ಲಿ ಹಿರಿಯಡ್ಕ ಗೋಪಾಲರಾಯರು, ಸುರಗಿಕಟ್ಟೆ ಬಸವಗಾಣಿಗರು ಪದ್ಯಕ್ಕಷ್ಟೇ ಮದ್ದಳೆ ನುಡಿಸುತಿದ್ದರು. ಹಾಗಾಗಿ ಇವೆರಡು ಬೇರೆ ಬೇರೆ ಶೈಲಿಗಳು. ಕಾಳಿಂಗ ನಾವಡರ ಇನ್ನೊಂದು ವಿಶೇಷ ಕಪ್ಪು ಮೂರರ ಶ್ರುತಿಗಿಂತಲೂ ಮೇಲೆ ಹಾಡಬಲ್ಲರು ಬಿಳಿ ಎರಡರ ಕೆಳಗೂ ಹಾಡಬಲ್ಲರು. ಕೆಲವರಿಗೆ ಏರು ಶ್ರುತಿ ಹೊರತು ಇಳಿಯಲ್ಲಿ ಹಾಡಲಾರರು ಇನ್ನು ಕೆಲವರು ಏರುಶ್ರುತಿಯಲ್ಲಿ ಹಾಡಲಾರರು. ಮಾರ್ವಿ ಶೈಲಿಯನ್ನು ತೆಂಕುತಿಟ್ಟಿನ ಬಲಿಪರ ಶೈಲಿಗೆ ಹೋಲಿಸಬಹುದು. ಕುಂಜಾಲು ಶೈಲಿಯಲ್ಲಿ ಕರ್ನಾಟಕಿ ಸಂಗೀತದ ಛಾಯೆ ಇದೆ. ನಾವಡರು ಗುರುಗಳ ಮಾರ್ವಿ ಶೈಲಿಯನ್ನು ಬಳಸಿಕೊಂಡು ಕರ್ನಾಟಕಿ ಸಂಗೀತದ ಲೇಪ ಮಾಡಿ ಹೊಸ ಶೈಲಿಗೆ ಕಾರಣೀಕರ್ತರಾದರು. ಉಪ್ಪೂರರು ತನ್ನ ಅಪೂರ್ವವಾದ ಬಾಯಿತಾಳದ ಮೂಲಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೋಟ ವೈಕುಂಠ, ಎಂ.ಎ.ನಾಯ್ಕ, ಮುಂತಾದ ಅನೇಕ ಕಲಾವಿದರಲ್ಲಿ ಹುದುಗಿದ್ದ ಪ್ರತಿಭೆಯನ್ನು ಹೊರಗೆಳೆದರೆ ನಾವಡರು ಐರೋಡಿ ಗೋವಿಂದಪ್ಪ ರಾಮನಾಯರಿ, ಅರಾಟೆ ಮಂಜುನಾಥ, ಶಿರಿಯಾರ ಮಂಜುïನಾಯ್ಕ್, ಬಳ್ಕೂರ ಕೃಷ್ಣ ಯಾಜಿ, ಕೊಂಡದಕುಳಿ, ಗೋಪಾಲ ಆಚಾರ್ಯ, ಕಿನ್ನಿಗೋಳಿ, ಹಳ್ಳಾಡಿ, ಜಲವಳ್ಳಿ, ನಗರ ಜಗನ್ನಾಥ ಶೆಟ್ಟಿ, ಕುಮ್ಟಾ ಗೋವಿಂದ ನಾಯಕ್ ಮುಂತಾದವರ ಪ್ರಸಿದ್ದಿಗೆ ಕಾರಣರಾದರು. ಕರ್ಣಾರ್ಜುನ ಕಾಳಗ, ದೌಪದಿ ಪ್ರತಾಪ, ಜಾಂಬವತಿ ಕಲ್ಯಾಣ ಮುಂತಾದ ಪ್ರಸಂಗಗಳಲ್ಲಿ ಅವರ ಪದ್ಯ ಜಾನುವಾರುಕಟ್ಟೆಯವರ ಪದ್ಯವನ್ನು ಹೋಲುತ್ತಿರುವುದನ್ನು ಗಮನಿಸಬಹುದು. ಆದರೆ ನಾವಡರ ಹೊಸ ಶೈಲಿ ಬಡಗುತಿಟ್ಟಿನ ಇನ್ನೊಂದು ಮೂರನೇ ಹೊಸ ಶೈಲಿ ಎಂದು ಎಲ್ಲಿಯೂ ದಾಖಲಾಗದಿದ್ದದ್ದು ಯಕ್ಷಗಾನದ ದೌರ್ಭಾಗ್ಯ ಸರಿ.
¥ÉÆæÃ.J¸ï.«.GzÀAiÀÄ PÀĪÀiÁgÀ ±ÉnÖ ªÀÄtÂ¥Á®
ಶ್ರೀ ದೇವಿ ಮಹಾತ್ಮೆ
ನಿಮಗಿದು ಗೊತ್ತೇ? - ೧೯೩೦ ರಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಕಾಸರಗೋಡು ಸಮೀಪದ ಕೊರಕ್ಕೋಡು ಎಂಬಲ್ಲಿ ಮೊದಲ ಪ್ರದರ್ಶನ ಕಂಡಿತು. ಅಂದಿನ ಪ್ರಥಮ ಪ್ರದರ್ಶನದಲ್ಲಿ ಶ್ರೀ ದೇವಿಯ ಪಾತ್ರದಲ್ಲಿ ಪಾಣಾಜೆ ಗಣಪತಿ ಭಟ್ಟರು ಕಾಣಿಸಿಕೊಂಡಿದ್ದರು. ಬಣ್ಣದ ವೇಷಧಾರಿ ಬಣ್ಣದ ಕುಂಜ಼್ ಮಹಿಷಾಸುರನ ಪಾತ್ರವನ್ನು ನಿರ್ವಹಿಸಿದ್ದರು.